ಈಗೋ ಉತ್ತರ…

ಅದೆಶ್ಟು ಬಿರುಸು
ಅಶ್ಟೆ ಹುಲುಸು
ಘಮ ಘಮ ಹಲಸಿನಂತೆ!
ಪುಟ್ಟ ಚಂದ್ರ ಚಕೋರ,
ಧರೆಗಿಳಿದು ಬೆರಗು ಮೂಡಿಸಿದನಲ್ಲ?
ನವ ಮಾಸ ಕಳೆದ,
ನವ ನೀತ ಚೋರ!
ಪುಟ್ಟ ಪೋರಾ!
ತಂದೆಯ ರೂಪ,
ತಾಯಿಯ ಕೋಪ,
ಜಗದಾ ಪರಿತಾಪ ಎಲ್ಲವೂ…
*

ಹಾಲುಗೆನ್ನೆಯ ಹಸುಗೂಸು
ಮುದ್ದು ಮುದ್ದು ಮುಖಾರವಿಂದ
ತೊಂಡೆಣ್ಣೆನ ತುಟಿ, ದಾಳಿಂಬೆ ಹಲ್ಲು
ಗೋಲಿಗಣ್ಣು, ಸೇಬುಗಲ್ಲ, ಹಾಲು ಹಲ್ಲು
ಬೇವಿನ ಎಸಳ ನೋಟ!
ಆಟ, ಪಾಠ, ನೋಟವೆಲ್ಲ ಲವಕುಶರ ಹಠ!
ತೊದಲು ಮಾತು, ಅಂಬೆಗಾಲು
ನವಿಲು ಕುಣಿತ ಸಾಧ್ಯವು!
*

ಹಸಿ ಹಸಿ ಹಾಲ ಶಿಶು, ಪ್ರತಿಮನೆಯ ಶಶಿ!
ಮುಸಿ ಮುಸಿ ಮುಗ್ಧ ಹಸು!
ಹೋರಿಯಂಗೆ ಬೆಳೆದ ಪರಿಯೇ ಬೆರಗು
‘ಮೂರು ವರ್ಷದ ಬುದ್ಧಿ, ನೂರು ವರ್ಷ’
ಸದಾ ಜಿಂಕೆ ಮರಿಯಂಗೇ… ಜಿಗಿತ!
ವರ್ಷ ವರ್ಷ ಸದಾ, ಹರಿದು ಬರುವ ತೇರಿನಂಗೆ…
ಹರ್ಷ ಹರ್ಷವೆನಲು ಸ್ವಲ್ಪವೇ?!
*

ಎದ್ದು ಬಿದ್ದು ಬಾನಂಗಳಕೆ ಪುಟಿದ!
ನವ ವಸಂತಗಳ ದಾಟಿ, ಜಗದ ತೊಟ್ಟಿಲಿಳಿದ
ಕುಡಿ ಮೀಸೆ ಕುವರ, ಚೆಲುವ ಚೆನ್ನಿಗ!
ಬುದ್ಧ, ಬಸವ, ಪಂಪ, ರನ್ನ, ಹಂಸರಂಗೆ…
ಏನೆಲ್ಲ ಕನಸನೇರಿ
ಭಾರತಾಂಬೆಗೆ ಕೀರ್ತಿ ಶಿಖರ ತರುವ!
*

ಜಯಹೋ… ಕನ್ನಡ ಕೀರ್ತಿಕುವರ!
ಶೂರ, ವೀರ, ಧೀರ… ಧೀರಾಽಽ ಮಗಧೀರ…
ನವ ನವೋನ್ಮೇಶ, ಶ್ಯಾಮ ಶ್ರೀರಾಮನವತಾರ!
ದೇಶ, ವಿದೇಶ ಸುತ್ತಿ, ಮೆರೆವ ಧೃವತಾರೆ…
ಹಾಲುಜೇನು, ಒಟ್ಟಿಗೆ ಕರೆವ ಧಾರೆ!
ಜಗದ ಬೆಳಕೋ? ಯುಗದ ಬೆಳಕೋ? ಕಾಣೇ…
ಬೆಳೆ ಬೆಳೆದು ಆಲವಾದ, ಕನಸ್ಸಿನ ಕುವರನೇ…
ಭಾರತದ ಕೀರ್ತಿ ಶಿಖರ, ಭಾನೆತ್ತರ ಬೆಳಗೋ…
ಈ ಜಗವೇ ನಿನ್ನೊಳಗೆ… ಈಗೋ ಉತ್ತರ!!
‘ಮುಂದುಂದಿ ಮುಸಲ ಪಂಡುಗಽ…’ ಎಚ್ಚರ!
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದುಡಿತಲೇ ಇರ್‍ತಾಳೆ
Next post ಗುಬ್ಬಿ

ಸಣ್ಣ ಕತೆ

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಬಾಳ ಚಕ್ರ ನಿಲ್ಲಲಿಲ್ಲ

    ತಂದೆಯ ಸಾವು ಕುಟುಂಬವನ್ನೇ ಬೀದಿಪಾಲು ಮಾಡಿತು. ಹೊಸಪೇಟೆಯ ಚಪ್ಪರದ ಹಳ್ಳಿಯಲ್ಲಿ ವಾಸವಾಗಿದ್ದ ಇಮಾಮ್ ಸಾಬ್ ಹಾಗೂ ಝೈನಾಬ್ ದಂಪತಿಗಳಿಗೆ ೬ ಹೆಣ್ಣು ಮಕ್ಕಳು, ಒಂದು ಗಂಡು ಮಗು.… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

cheap jordans|wholesale air max|wholesale jordans|wholesale jewelry|wholesale jerseys